ಮೇ 19 ರಿಂದ ಮೇ 25ರ ವರೆಗೆ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಯಕ್ಷಗಾನ ಕಲಾರಂಗದ ತಾಳಮದ್ದಲೆ ಸಪ್ತಾಹ-2019 ‘ಹರಿಭಕ್ತಿ ಪಾರಮ್ಯ’ ಸಂಪನ್ನಗೊಂಡಿತು. ಮೇ 19 ರಂದು ತಾಳಮದ್ದಲೆ ಸಪ್ತಾಹವನ್ನು ಪರ್ಯಾಯ ಶ್ರೀ ಪಲಿಮಾರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಉದ್ಘಾಟಿಸಿದರು. ಪ್ರತಿ ದಿನ ಕ್ರಮವಾಗಿ ಧ್ರುವ, ಪ್ರಹ್ಲಾದ, ಅಂಬರೀಶ, ರುಕ್ಮಾಂಗದ, ಜಟಾಯು-ಶಬರಿ-ಹನುಮಂತ, ಅತಿಕಾಯ, ಧರ್ಮರಾಯ-ಭೀಷ್ಮ ಪ್ರಸಂಗಗಳು ಕೇಳುಗರಿಗೆ ಮುದವನ್ನು ನೀಡಿದವು. ಸಮಾರೋಪ ಸಮಾರಂಭ ಮೇ 25 ರಂದು ಜರಗಿತು. ಈ ಸಂದರ್ಭದಲ್ಲಿ ತಾಳಮದ್ದಲೆ ಅರ್ಥಧಾರಿಗಳಿಗೆ ಕೊಡಲ್ಪಡುವ ಮಟ್ಟಿ ಮುರಲೀಧರ ರಾವ್ ಪ್ರಶಸ್ತಿಯನ್ನು ಕೆ.ವಿ ಗಣಪಯ್ಯ ಹಾಗೂ ಪೆರ್ಲ ಕೃಷ್ಣ ಭಟ್ ಪ್ರಶಸ್ತಿಯನ್ನು ನೇವಣಿ ಗಣೇಶ್ ಭಟ್ ಇವರಿಗೆ ಪ್ರದಾನ ಮಾಡಲಾಯಿತು.
Yaksha Updates
- ಅಮೃತಾನುಸಂಧಾನ – ರಾಷ್ಟ್ರೀಯ ವಿಚಾರ ಸಂಕಿರಣ
- ಕಡತೋಕ ಕೃತಿ – ಸ್ಮೃತಿ : ಯಕ್ಷರಂಗೋತ್ಸವ
- ಯಕ್ಷಗಾನ ಅಂಚೆ ಚೀಟಿ ಬಿಡುಗಡೆ, ಕರಾವಳಿ ಕಲೆಗೆ ರಾಷ್ಟೀಯ ಗೌರವ
- ಸೇವಾಭೂಷಣ ಪ್ರಶಸ್ತಿ ಪಾಂಡುರಂಗ ಶಾನುಭಾಗ್ ಇವರಿಗೆ | ಯಕ್ಷಗಾನ ಕಲಾರಂಗ(ರಿ.) ಉಡುಪಿ
- ‘ಯಕ್ಷೋತ್ಸವ-2024’ – ಎಸ್.ಡಿ.ಎಂ. ಕಾನೂನು ಕಾಲೇಜಿನಲ್ಲಿ ಅಂತರ್ ಕಾಲೇಜು ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆ
- ಇನ್ನೂ ಈಡೇರದ ಯಕ್ಷಗಾನ ಪ್ರಾಧಿಕಾರ ರಚನೆ ಭರವಸೆ
- ಯಕ್ಷಧ್ರುವ ಪಟ್ಲ ಫೌಂಢೇಶನ್ ಟ್ರಸ್ಟ್ (ರಿ) ಮಂಗಳೂರು
- ಸುರತ್ಕಲ್ಲಿನಲ್ಲಿ ವಿದ್ವಾನ್ ಸುರತ್ಕಲ್ ಸುಬ್ಬರಾವ್ ಯಕ್ಷವೇದಿಕೆಯ ಉದ್ಘಾಟನೆ ಮತ್ತು ಸಂಸ್ಮರಣೆ