ಉಪ್ಪಿನಂಗಡಿ ಸಮೀಪದ ‘ಕೇದಾರ’ ನಿವಾಸಿ ಕಜೆ ಈಶ್ವರ ಭಟ್ (90ವ)ರವರು ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಸಾಹಿತಿಯಾಗಿ, ಸಂಘಟಕರಾಗಿ, ಸಹಕಾರಿ ಧುರೀಣರಾಗಿ ವಿವಿಧ ಕ್ಷೇತ್ರಗಳಲ್ಲಿ ತನನ್ನು ತೊಡಗಿಸಿಕೊಂಡಿದ್ದ ಈಶ್ವರ ಭಟ್ ರವರು ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಮೃತರು ಪತ್ನಿ, ಪುತ್ರರಾದ ಡಾ. ಗೋವಿಂದ ಪ್ರಸಾದ್ ಕಜೆ, ವಕೀಲ ಮಹೇಶ್ ಕಜೆ ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ.