26-06-2022 ಉಡುಪಿ ಪೂರ್ಣಪ್ರಜ್ಞಾ ಸಭಾಂಗಣದಲ್ಲಿ ಸೋದೆ ಶ್ರೀಗಳ ಮತ್ತು ಅದಮಾರು ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ‘ಚಿರಂಜೀವಿ ಭಾರ್ಗವ’ ಯಕ್ಷಗಾನ ಅತ್ಯಂತ ಮನೋಜ್ಞವಾಗಿ ಪ್ರದರ್ಶಿಸಲ್ಪಟ್ಟಿತು. ಇದೇ ಸಂದರ್ಭದಲ್ಲಿ ವಿದ್ವಾನ್ ಗಣಪತಿ ಭಟ್ ವಿರಚಿತ ‘ಯಕ್ಷಗಾನ ಗಾನ ಸಂಹಿತೆ’ ಪುಸ್ತಕವನ್ನು ಸೋದೆ ಶ್ರೀಗಳು ಅನಾವರಣಗೊಳಿಸಿದರು. ಆರಂಭದಲ್ಲಿ ಅಂಬಲಪಾಡಿ ಯಕ್ಷಗಾನ ಮಂಡಳಿಯ ಬಾಲ ಕಲಾವಿದರಿಂದ ಪೂರ್ವರಂಗ ಪ್ರಸ್ತುತಿಗೊಂಡಿತು. ಸಾಗರದ ಐ. ಡಿ. ಗಣಪತಿಯವರಿಂದ ಪದ್ಯ ರಚಿಸ್ಪಟ್ಟ ಪ್ರಸಂಗದ ಸಂಯೋಜನೆಯನ್ನು ಸದಸ್ಯರಾದ ಎಚ್. ಎನ್. ವೆಂಕಟೇಶ್ ಮಾಡಿದ್ದರು. ಮುಂದಿನ ಭಾನುವಾರ ತೆಂಕುತಿಟ್ಟು ಯಕ್ಷಗಾನ ‘ಅನಭಿಷಿಕ್ತ ಸಾಮ್ರಾಜ್ಞಿ’.

error: Content is protected !!
Share This