ನವ ವೃಂದಾವನ ಸೇವಾ ಪ್ರತಿಷ್ಠಾನ ಹೊಸಬೆಟ್ಟು (ಶ್ರೀ ರಾಘವೇಂದ್ರ ಮಠ) ಇದರ ಸಂಸ್ಥಾಪಕ ಹಾಗೂ ಖ್ಯಾತ ನರ್ತನ ಹರಿದಾಸ ‘ಕೀರ್ತನ ಕೇಸರಿ’ ವಾದೀಶಾಚಾರ್ (71) ಅವರು ನ. 4 ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ.

ಹರಿಕೀರ್ತನೆ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿದ್ದ ಅವರು ಮಠದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಪ್ರೋತ್ಸಾಹ ನೀಡುತ್ತಿದ್ದರು. ಪುತ್ತಿಗೆ ಸುಗುಣೇಂದ್ರ ತೀರ್ಥರೊಂದಿಗೆ ದೇಶ ವಿದೇಶ ಪರ್ಯಟನೆಗೈದು ಧರ್ಮ ಬೋಧನೆ ಹಾಗೂ ಪ್ರಚಾರದಲ್ಲಿ ತೊಡಗಿದ್ದರು. ಟಿ. ವಿ. ವಾಹಿನಿಗಳಲ್ಲಿ ಧಾರ್ಮಿಕ ಪ್ರವಚನ ನೀಡುತ್ತಿದ್ದರು. ತಿರುಪತಿಯ ಟಿಟಿಡಿ ಯಿಂದ ಪುರಂದರ ಅನುಗ್ರಹ ಪ್ರಶಸ್ತಿ ಪಡೆದಿರುವ ಅವರನ್ನು ಹಲವಾರು ಸಂಘ ಸಂಸ್ಥೆ ಗಳು ಗೌರವಿಸಿವೆ.

error: Content is protected !!
Share This